Posts

Showing posts from May, 2021

ಹಸಿದವರ ಹೊಟ್ಟೆ ತುಂಬಿಸವ ಮೂಲಕ ಮಾನವೀಯತೆ ಮೆರೆದ ಕುಣಿಗಲ್ ಯುವಕಾಂಗ್ರೆಸ್ ...!

Image
ಕುಣಿಗಲ್ :  ದೇಶವೇ ಕರೋನ ಎರಡನೇ ಅಲೆಗೆ ತತ್ತರಿಸಿಹೋಗಿರುವ ಸಂದರ್ಭದಲ್ಲಿ ತಾಲೂಕಿನ ಯುವ ಕಾಂಗ್ರೆಸ್ ವತಿಯಿಂದ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲೋಹಿತ್ ರವರ ನೇತೃತ್ವದಲ್ಲಿ ಇಂದು ತಾಲೂಕಿನ ಸರಕಾರಿ ಆಸ್ಪತ್ರೆಯ ಕೋವಿಡ್ ರೋಗಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಆಹಾರ ಪಟ್ಟಣಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಕ್ಷೇತ್ರದ ಶಾಸಕರಾದ ಡಾ.ರಂಗನಾಥ್ ರವರ ಮಾರ್ಗದರ್ಶನದಂತೆ ನಾವು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಸಾರ್ವಜನಿಕರಿಗೆ ಹಾಗೂ ಕರೋನ ಸೋಂಕಿತರಿಗೆ ಆಹಾರ ಪಟ್ಟಣಗಳನ್ನು ನೀಡಿದ್ದೇವೆ. ಸಾರ್ವಜನಿಕರ ಅನಾವಶ್ಯಕ ಹೊರಗೆ ಬರಬೇಡಿ ಕಡ್ಡಾಯವಾಗಿ ಮಾಸ್ಕ್,  ಸ್ಯಾನಿಟೈಸರ್ ಬಳಸಿ ಆದಷ್ಟು ಜಾಗೃತರಾಗಿರಿ ಎಂದು ವಿನಂತಿಸಿದರು‌. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಚಲಮಸಂದ್ರ ಸಂತು,  ಗ್ರಾಮ ಪಂಚಾಯ್ತಿ ಸದಸ್ಯರಾದ ಉಮೇಶ್  ಗೌಡ ಹಾಗೂ ಇತರರು ಇದ್ದರು.

ರೋಗಿಗಳಿಗೊಸ್ಕರ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಶಾಸಕ

Image
ಕುಣಿಗಲ್ :  ಕುಣಿಗಲ್ ಕ್ಷೇತ್ರದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ, ಸೋಂಕಿತರಿಗೆ ಸರ್ಕಾರದಿಂದ ಸರಿಯಾದ ಸಮಯದಲ್ಲಿ ಬೆಡ್, ರೆಮ್'ಡಿಸಿವರ್, ಆಮ್ಲಜನಕ ಹಾಗೂ ಲಸಿಕೆ ಗಳು ಸರಿಯಾದ ಸಮಯಕ್ಕೆ ತಲುಪಿಸಲಾಗದ ನೋವಿನಲ್ಲಿ ಇಂದು ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ.ರಂಗನಾಥ್ ರವರು ಕುಣಿಗಲ್ ತಾಲೂಕಿನ ಆಸ್ಪತ್ರೆ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.