Posts

Showing posts from April, 2021

ಕುಣಿಗಲ್ ತಾಲೂಕಿನ ಮನೆ ಮಗ ಖ್ಯಾತ ನಿರ್ಮಾಪಕ "ರಾಮು " ಕರೋನಗೆ ಬಲಿ...!

Image
ಬೆಂಗಳೂರು: ನಟಿ ಮಾಲಾಶ್ರೀ ಪತಿ ಕೋಟಿ ರಾಮು ಅವರು ಕೊರೊನಾದಿಂದಾಗಿ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆ ರಾಮು ಅವರು ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದ್ದು ಅವರ ಕೊರೊನಾ ಸೋಂಕು ವರದಿ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ರಾಮು ಅವರು.. ಕನ್ನಡದ ಎಕೆ 47, ಬಾವ ಬಾಮೈದ, ದುರ್ಗಿ, ಗೂಳಿ, ರಾಜ್​ವಿಷ್ಣು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು.

ಮತ್ತೆ 14 ದಿನ ಕರ್ನಾಟಕ ಲಾಕ್ ಡೌನ್..!

Image
ಕರ್ನಾಟಕದಲ್ಲಿ ನಾಳೆಯಿಂದ ಮೇ 10 ವರೆಗೆ ವೀಕೆಂಡ್ ಕರ್ಪ್ಯೂ ಮಾದರಿಯ ಲಾಗ್ ಡೌನ್ ನಡೆಸುವುದಾಗಿ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಏಪ್ರಿಲ್ 27 ರ ಮಂಗಳವಾರ ಸಂಜೆ 6 ಗಂಟೆಯಿಂದ ಈ ಆದೇಶ ಅಸ್ತಿತ್ವಕ್ಕೆ ಬರಲಿದ್ದು ಮೇ 10 ರವರೆಗೆ ಮುಂದುವರಿಯಲಿದೆ ರಾಜ್ಯದ ಜನತೆಗೆ ಉಚಿತ ಔಷಧಿ ನೀಡುವ ತಯಾರಿಯನ್ನು ಸರ್ಕಾರ ಮಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ತಿಳಿಸಿದರು