Posts

Showing posts from September, 2020

ಕುಣಿಗಲ್ ಬಂದ್ ಯಶಸ್ವಿ...!

Image
ಕುಣಿಗಲ್ :  ಸುಧಾರಣಾ ಕಾಯ್ದೆ , ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹಲವಾರು ಸಂಘಟನೆಗಳು ನಡೆಸುತ್ತಿರು ಬಂದ್ ಕುಣಿಗಲ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ, ಎಪಿಎಂಸಿ ಕಾಯ್ದೆ ,  ಶಿಕ್ಷಣ ಸೇರಿದಂತೆ ಹಲವಾರು ಕಾಯ್ದೆಗಳ ವಿರುದ್ಧ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ತಾಲೂಕಿನ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದವು.  ಕುಣಿಗಲ್ ತಾಲೂಕಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದ ಸಂದರ್ಭ ಅಂಗಡಿಗಳು , ಹೋಟೆಲ್ ಗಳು ಮುಚ್ಚಿದ್ದವು ಬಸ್ಸುಗಳ ಸಂಚಾರ ವಿರಳವಾಗಿತ್ತು.    ಪ್ರತಿಭಟನೆಯಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ತಾಲೂಕು ರೈತ ಸಂಘದ ಅಕ್ಷರದ ಅನಿಲ್ ಕುಮಾರ್ , ಲಕ್ಷ್ಮಣಗೌಡ ದಲಿತ ಸಂಘರ್ಷ ಸಮಿತಿಯ ಶಿವಶಂಕರ್ ಚಿಕ್ಕಣ್ಣ , ಅಬ್ದುಲ್ ಮುನಾಫ್ ಡಾಕ್ಟರ್ ರಾಜಕುಮಾರ್ ಸಂಘದ ಅಧ್ಯಕ್ಷ ರಂಗಸ್ವಾಮಿ , ಕರವೇ ಅಧ್ಯಕ್ಷ ಮಂಜುನಾಥ್ , ಕನ್ನಡ ಸೇನೆಯ ಶ್ರೀನಿವಾಸ್ , ಪ್ರಗತಿಪರ ಚಿಂತಕ ಜಿ.ಕೆ ನಾಗಣ್ಣ ಸೇರಿದಂತೆ ಹಲವು ಮಂದಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಸುರೇಶ್​​ ಅಂಗಡಿ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ -ಶಾಸಕ ಡಾ||ರಂಗನಾಥ್

Image
ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್​ ಅಂಗಡಿಯವರ ಸಾವಿನ ಸುದ್ದಿ ಕೇಳಿ ನಿಜಕ್ಕೂ ಆಘಾತಕ್ಕೊಳಗಾಗಿದ್ದೇನೆ ಎಂದು ಕುಣಿಗಲ್ ಶಾಸಕ ಡಾ||ರಂಗನಾಥ್ ಹೇಳಿದ್ದಾರೆ.  ಸುರೇಶ್​ ಅಂಗಡಿ ಅನುಭವಿ ರಾಜಕಾರಣಿಯಾಗಿದ್ರು.  ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಎಕ್ಸ್ಪ್ರೆಸ್ ರೈಲುಗಳು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡುವಂತೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಅವರು ಕೂಡ ನನ್ನ ಮನವಿಗೆ ಸ್ಪಂದಿಸಿದ್ರು. ಅವರನ್ನು ಕಳೆದುಕೊಂಡಿದ್ದು ತುಂಬಾ ದುಖಃವಾಗುತ್ತಿದೆ. ಅವರ ಸಾವಿನಿಂದ ರಾಜ್ಯಕ್ಕೆ ಹಾಗೂ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ನಿಮ್ಮ ಊರಿನ ವೋಟರ್ ಲಿಸ್ಟ್ ಆನ್ಲೈನ್ ನಲ್ಲಿ ಪಡೆಯಿರಿ.

Image
ಊರಿನ ವೋಟರ್ ಲಿಸ್ಟ್ ಪಡೆಯಲು ಕಷ್ಟ ಪಡಬೇಕಾಗುತ್ತದೆ. ಆದರೆ ಸುಲಭವಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೇಗೆಂದರೆ ಚೀಪ್ ಇಲೆಕ್ಟ್ರಾಲ್ ಆಫಿಸರ್ ಕರ್ನಾಟಕ ಈ ವೆಬ್ ಸೈಟ್ ನಲ್ಲಿ ಹಲವು ಸೇವೆಗಳು ದೊರೆಯುತ್ತದೆ. ಅದರಲ್ಲಿ ವ್ಯೂ ವೋಟರಲ್ ಇಲೆಕ್ಟ್ರಲ್ ರೋಲ್ಸ್ ಇದನ್ನು ಕ್ಲಿಕ್ ಮಾಡಿ ನಂತರ ಕೆಳಗೆ ವ್ಯೂ ಫೈನಲ್ ಇಲೆಕ್ಟ್ರಲ್ ರೋಲ್ಸ್ 2019 ಇದನ್ನು ಕ್ಲಿಕ್ ಮಾಡಬೇಕು. ಪ್ರತಿ ವರ್ಷಕ್ಕೊಮ್ಮೆ ವೋಟರ್ ಲಿಸ್ಟ್ ಬಿಡುಗಡೆಯಾಗುತ್ತದೆ . ನಂತರ ನಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು ವೋಟರ್ ಐ.ಡಿಯಲ್ಲಿ ಭಾಗ ಸಂಖ್ಯೆ, ಮತ್ತು ವಿಧಾನಸಭಾ ಕ್ಷೇತ್ರದ ಸಂಖ್ಯೆ ಇರುತ್ತದೆ ಭಾಗ ಸಂಖ್ಯೆಯನ್ನು ಹಾಕಿ ಸರ್ಚ್ ಮಾಡಿದರೆ ಸಂಪೂರ್ಣ ವೋಟರ್ ಲಿಸ್ಟ್ ದೊರೆಯುತ್ತದೆ ಅದರಲ್ಲಿ ನಮ್ಮ ಹೆಸರು ಬೇಕೆಂದರೆ ಕಂಪ್ಯೂಟರ್ ನಲ್ಲಿ ಕಂಟ್ರೋಲ್ ಎಫ್ ಹೊಡೆದರೆ ಫೈಂಡಿಂಗ್ ಬರುತ್ತದೆ ಅಲ್ಲಿ ಹೆಸರನ್ನು ಟೈಪ್ ಮಾಡಿದರೆ ನಮ್ಮ ವೋಟರ್ ಬಗ್ಗೆ ಮಾಹಿತಿ ಪಡೆಯಬಹುದು. ಈ ರೀತಿ ಯಾವುದೇ ಊರಿನ ವೋಟರ್ ಲಿಸ್ಟ್ ನ್ನು ಸುಲಭವಾಗಿ ಮತ್ತು ಯಾವುದೇ ಖರ್ಚಿಲ್ಲದೆ ಮೊಬೈಲ್ ನಿಂದ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಕುಣಿಗಲ್ ಸುದ್ದಿ

Image

ಕುಣಿಗಲ್ ತಾಲೂಕಿನಲ್ಲಿ ಯುವ ಕಾಂಗ್ರೆಸ್ ಬಲಪಡಿಸಲು ಶಾಸಕ ಡಾ||ರಂಗನಾಥ್ ಕರೆ.!!

   ಕುಣಿಗಲ್ ತಾಲೂಕಿನಲ್ಲಿ ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಯುವ ಕಾಂಗ್ರೆಸ್ ಬಲಪಡಿಸಲು ಶಾಸಕರ ಕರೆ ನೀಡಿದರು. 'ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿ. ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನೀವು ನಾಯಕರಾಗಿ ಬೆಳೆಯಿರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯೂತ್ ಕಾಂಗ್ರೆಸ್ ಸದಸ್ಯರಿಗೆ ಸಂದೇಶ ರವಾನಿಸಿದ್ದಾರೆ ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್  ಕುಣಿಗಲ್ ತಾಲೂಕಿನಲ್ಲಿ ಬಲಪಡಿಸಲು ಶಾಸಕರಾದ ಡಾ||ರಂಗನಾಥ್ ರವರು ತಾಲೂಕಿನ ಯುವಕರನ್ನು ಪಕ್ಷದತ್ತ ಸೆಳೆಯಲು ಈಗಾಗಲೇ ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ.  ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಈ ಪಕ್ಷದ ನೆರಳಿನಲ್ಲಿ ನಾವೆಲ್ಲ ಬೆಳೆಯುತ್ತಿದ್ದೇವೆ. ಇವತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ದೊಡ್ಡ ಯುವಕರ ಪಡೆಯನ್ನೇ ನಿರ್ಮಾಣ ಮಾಡಿದೆ. ಇಂದು ನಾವು ನೀವೆಲ್ಲ ಸೇರಿ ಈ ದೇಶದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ಈ ದೇಶಕ್ಕೆ ಶಕ್ತಿ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದು, ಯುವಕರನ್ನು ಸೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ರಾಹುಲ್ ಗಾಂಧಿ ಅವರು ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯೂತ್ ಕಾಂಗ್ರೆಸ್ ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದ...