Posts

Showing posts from November, 2020

ನೂತನ ಶಾಸಕ ಮುನಿರತ್ನಗೆ ಶಾಕ್ ಕೊಟ್ಟ ಹೈಕೋರ್ಟ್..!

Image
 ಆರ್ ನಗರ ಉಪಚುನಾವಣೆಯಲ್ಲಿ ಗೆದ್ದು ನೂತನ ಶಾಸಕರಾಗಿರುವ ಮುನಿರತ್ನಗೆ ಇಂದು ಹೈಕೋರ್ಟ್ ಶಾಕ್ ಕೊಟ್ಟಿದೆ ಹೌದು ವೋಟರ್ ಐಡಿ ಪತ್ತೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಐಪಿಎಸ್​ ಅಧಿಕಾರಿಯೊಬ್ಬರನ್ನ ನೇಮಿಸಿ ಪ್ರಕರಣದ ಪರಾಮರ್ಶೆ ನಡೆಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಮುನಿರತ್ನ ವಿರುದ್ಧ ಸಿಬಿಐ ತನಿಖೆ ಕೋರಿ ಆನಂದ್, ಸಂತೋಷ್ ಎಂಬುವವರು ಪಿಐಎಲ್​ ಸಲ್ಲಿಸಿದ್ದರು. ತನಿಖೆ ನಡೆಸಲು ಸಿಬಿಐ ಅಸಹಾಯಕತೆ ಹಿನ್ನೆಲೆ ಹಿರಿಯ ಐಪಿಎಸ್​ ಅಧಿಕಾರಿ ನೇಮಿಸಲು ಡಿಜಿ ಐಜಿಪಿಗೆ ಸಿಜೆ ಎ.ಎಸ್. ಓಕಾ ನೇತೃತ್ವದ ಪೀಠ ಸೂಚನೆ ನೀಡಿದೆ. ಆರೋಪಿ ಪಟ್ಟಿಯನ್ನ ಪರಿಶೀಲಿಸಿ ವರದಿ ಸಲ್ಲಿಸಬೇಕು, ತನಿಖೆ ಸೂಕ್ತವಾಗಿ ನಡೆದಿದೆಯೋ ಇಲ್ಲವೋ ಪರಿಶೀಲಿಸಬೇಕು. ಅರ್ಜಿದಾರರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಬೇಕು. ತನಿಖೆ ಮುಂದುವರಿಕೆ ಅವಶ್ಯಕತೆ ಇದೆಯೋ ಇಲ್ಲವೋ ತೀರ್ಮಾನಿಸಬೇಕು. ಡಿಸೆಂಬರ್ 15 ರೊಳಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

‘ಬಿಜೆಪಿ ಅಭ್ಯರ್ಥಿಗೆ ಇಷ್ಟು ಮತ ಬರಲು ಸಾಧ್ಯವೇ ಇಲ್ಲ, ಇದರ ಹಿಂದಿನ ಕಾರಣ ಹುಡುಕುತ್ತೇವೆ’ -ಡಿಕೆ ಸುರೇಶ್

Image
 ಹೆಚ್ಚು ದಿನ ಹಣ ಬಲ ತೋಳ್ಬಲ ನಡೆಯಲ್ಲ. ಮತದಾರರಲ್ಲಿ ಪ್ರಬುದ್ಧತೆ ಕಡಿಮೆಯಾಗಿದೆ ಅನಿಸ್ತಿದೆ. ಇಷ್ಟು ಮತ ಬಿಜೆಪಿಗೆ ಬರಲು ಸಾಧ್ಯವಿಲ್ಲ. ಸ್ವತಃ ಬಿಜೆಪಿ ಅಭ್ಯರ್ಥಿಗೆ ಇದು ಶಾಕ್ ಆಗಿರಬೇಕು. ಇದರ ಹಿಂದಿನ ಕಾರಣ ಹುಡುಕುವ ಪ್ರಯತ್ನ ಮಾಡ್ತೇವೆ ಅಂತಾ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದರು.. ಇಂದು ಸೋಲಾಯಿತು ಅನ್ನೋ ಮಾತ್ರಕ್ಕೆ ಯಾರೂ ಎದೆಗ ಎದೆಗುಂದುವ ಅಗತ್ಯ ಇಲ್ಲ. ಯಾವುದೇ ದೌರ್ಜನ್ಯ ಆದ್ರೂ ಅದಕ್ಕೆ ಪ್ರತಿರೋಧ ಒಡ್ಡುವಂತಹ ಕೆಲಸವನ್ನ ಮುಂದಿನ ದಿನಗಳಲ್ಲಿ ಮಾಡ್ತೇವೆ ಎಂದರು.

ಉಪಚುನಾವಣೆ ಸಮರ ಎರಡು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

Image
ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿವಾಗಿದ್ದು, ಮೊದಲ ಹಂತದ ಮತಎಣಿಕೆಯಲ್ಲಿ ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ. ಶಿರಾ ಕ್ಷೇತ್ರದ ಮತ ಎಣಿಕೆ ತುಮಕೂರಿನ ಸರ್ಕಾರಿ ಪಾಲಿಟೆಕ್ನ್ ಕಾಲೇಜಿನಲ್ಲಿ ನಡೆಯುತ್ತಿದ್ದರೆ, ಆರ್.ಆರ್.ನಗರದ ಮತ ಎಣಿಕೆ ಕಾರ್ಯ ಜ್ಞಾನಾಕ್ಷಿ ವಿದ್ಯಾ ನಿಕೇತನ್ ಶಾಲೆಯಲ್ಲಿ ನಡೆಯುತ್ತಿದೆ. ಸದ್ಯ ಆರ್.ಆರ್.ನಗರ ಕ್ಷೇತ್ರದಲ್ಲಿ ಮೂರು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಮುನಿರತ್ನ ಅವರು 6418 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಮುನಿರತ್ನ 15,110 ಮತಗಳನ್ನು ಪಡೆದರೆ, ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹೆಚ್​ ಅವರಿಗೆ 8,692 ಮತಗಳು ಲಭಿಸಿದೆ. ಇನ್ನು ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಲ್ಕನೆ ಸುತ್ತಿನಲ್ಲೂ 1,519 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 11,770 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 10,251 ಮತಗಳು, ಜೆಡಿಎಸ್ ಅಭ್ಯರ್ಥಿ 6,614 ಮತಗಳನ್ನು ಗಳಿಸಿದ್ದಾರೆ.

ಕುಣಿಗಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ...!

Image
ಕುಣಿಗಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ...! ಇಂದು ನಡೆದ ಕುಣಿಗಲ್ ಪಟ್ಟಣದ ಪುರಸಭೆ  ಅಧ್ಯಕ್ಷ ,ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ  ಎಸ್.ಕೆ ನಾಗೇಂದ್ರ ರವರು ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಮಂಜುಳಾ ರಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಶಾಸಕ ರಂಗನಾಥ್ ಹಾಗೂ  ಸಂಸದರಾದ ಡಿಕೆ ಸುರೇಶ್ ರವರ ಆದೇಶದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಪುರಸಭಾ ಸದಸ್ಯರುಗಳ ಸಹಮತದೊಂದಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರುಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ವರಿಷ್ಠರ ತೀರ್ಮಾನವೇ ಅಂತಿಮ ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕರು ತಿಳಿಸಿದರು.